ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Monday, May 27, 2013

ಆದರೂ ಹಣತೆ ಹಚ್ಚಬೇಕು,


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//





ಎಲ್ಲಾ ಮನಸ್ಸುಗಳು ಬೆತ್ತಲಾಗಬೇಕು,
ನಟನೆಯ ಮುಖವಾಡಗಳು ಕಳಚಬೇಕು,
ನಿಜವು ಸಂಚುಗಳ ಗೆಲ್ಲಬೇಕು,
ನ್ಯಾಯ ಉಳಿಯಬೇಕು,ಮಾನವಿಯತೆ ಮೆರೆಯಬೇಕು/


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//



ಅಜ್ಣ್ನಾನದ ಕತ್ತಲೆ ಸರಿಯಬೇಕು,
ಜಾಗೃತಿಯ ಪ್ರಜ್ಣೆ ಅರಳಬೇಕು,
ಎಲ್ಲರ ಕನಸುಗಳು ನನಸಾಗಬೇಕು,
ಸ್ವಾರ್ಥಗಳು ಅಳಿಯಬೇಕು, ಸಂಸ್ಕೃತಿ ಮೆರೆಯಬೇಕು/


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//


Saturday, July 28, 2012

* ಆತ್ಮಾವಲೋಕನ *

* ಆತ್ಮಾವಲೋಕನ *



ಓ ಮನಸೇ, ನನ್ನ ಕನಸೇ,



ಏನಾಗಬೇಕೆಂದು ಬಯಸಿದ್ದೆ ನಾನು,

ಏನಾಗಿ ಹೋದೆ..?!!!



ನಾನೇ ಬರೆದ ಕವನಗಳು

ನನ್ನನ್ನ ಅಣಕಿಸುತ್ತಿವೆ/



ಬದುಕು-ಪ್ರೀತಿ-ಸಾಧನೆ ಗಳ ಬಗೆಗೆ,

ನಾ ಬರೆದ ಸಾಲುಗಳನ್ನು ತೋರಿಸಿ//



ಏನಾಗಬೇಕಿತ್ತು, ಈಗೇನಾಗಿದ್ದೇನೆ?!!!



ಓರಗೆಯವರು ಬೆಳೆದರು,

ಮೂರನೆಯವರು ಮೆರೆದರು/



ಸೋಮಾರಿತನ ಮೈ ಸೇರಿತು,

ಪ್ರೇಮ ಮನಸ್ಸೊಡೆಯಿತು/



ಕನಸುಗಳು ತಿರುಗಿಬಿದ್ದವು,

ಆಸೆಗಳು ಓಡಿಹೋದವು/



ಹಾಸಿಗೆ ಕೈ ಸೆರೆಯಾಯಿತು,

ನಿದಿರೆಯಲಿ ಜಗ ಮರೆಯಿತು/





ಈಗೇನಾಗಿದ್ದೇನೆ, ಮುಂದೇನಾಗಬೇಕು..?!!!



ಅಂದುಕೋಂಡಿದ್ದು ಆಗಲೇಬೇಕು,

ಆಗುವವರೆವಿಗೂ ದಣಿಯಲೇಬೇಕು/



ಕಂಡ ಕನಸುಗಳು ನನಸಾಗಲೇಬೇಕು,

ರಾತ್ರಿಗಳನು ಸುಟ್ಟು ಸಾಧಿಸಲೇಬೇಕು/



ನನ್ನ ಮಗು ನೆಮ್ಮದಿಯಾಗಿ ನಿದ್ರೆ ಮಾಡಬೇಕು,

ಯಶಸ್ಸು ನನ್ನ ಹುಡುಕಿಕೋಂಡು ಬರಬೇಕು/



ಬದುಕಲೇಬೇಕು ಸಾರ್ಥಕವಾಗಿ,

ಜಯಿಸಲೇಬೇಕು ಕನ್ನಡಿಗನಾಗಿ/



ನಾ ಬಯಸಿದ ಬದುಕು,

ನನ್ನದಾಗಲೇಬೇಕು/



-ಲಿಂಗೇಶ್ ಹುಣಸೂರು,

ಬಿಂದುವಿನಿಂದ ಅನಂತದೆಡೆಗೆ...

Tuesday, February 14, 2012

ಪ್ರೀತಿ ....... ನಿನಗೆಲ್ಲಿಯ ವ್ಯಾಖ್ಯಾನ ?!

ಆತ್ಮೀಯ ಗೆಳೆಯರ ಬಳಗಕ್ಕೆ ಪ್ರೀತಿ ದಿನದ ಶುಭ ಹಾರೈಕೆಗಳು. 

ಪ್ರೀತಿ ಎಂದರೆ ಅದು ಒಂದು ದಿನದ ಸಂಭ್ರಮವಲ್ಲ, ಒಂದು ದಿನದ ಆಚರಣೆಯಲ್ಲ. ಅದು ನಿತ್ಯ ನಿರಂತರ ಸ್ಪೂರ್ತಿ,
ಸ್ನೇಹ, ನಂಬಿಕೆ,ಆಸರೆ,ಅಕ್ಕರೆ,ಆದರ , ಅಭಿಮಾನ ಗಳ ಚೈತನ್ಯ ,ಅದಮ್ಯ ಚೇತನ. ನನಗನಿಸಿದ ಹಾಗೆ, ನಾನು 
ಅನುಭವಿಸಿದ ಹಾಗೆ ಪ್ರೀತಿಯೆಂದರೆ ಭಾಷೆಗೆ ನಿಲುಕದ ಭಾವ ದೀಪ್ತಿ. ಎಲ್ಲಾ ಅರ್ಥಗಳ ಆಚೆಗಿನ ಅರ್ಥ ,
ಬದುಕಿನ ಚೈತನ್ಯ.



ಪ್ರೀತಿ .......
ನಿನಗೆಲ್ಲಿಯ  ವ್ಯಾಖ್ಯಾನ ?!
ಎಂದೂ ಮುಗಿಯದ ಮಧುರ ಗೀತೆ,
ಅನಂತ ಅರ್ಥಗಳ ಆಗಸ ನೀನು//


ಬಯಸುವ ಹೃದಯಗಳ,
ಮಹೋನ್ನತ ಭಾವ ನೀನು . 
ಮನಸು-ಹೃದಯ -ಆತ್ಮಗಳ,
ಸಮ್ಮಿಲನದ ಭಾಷೆ ನೀನು //




ಹೃದಯದ ಗರ್ಭದಲ್ಲಿ,
ಅಡಗಿಸಿಟ್ಟ ಮುತ್ತು ನೀನು/
ಪ್ರತಿ ಘಳಿಗೆ, ಪ್ರತಿ ಘಂಟೆ, ಪ್ರತಿ ದಿನ,
ಭಾವಿಸುವ ಭಾಂದವ್ಯ  ನೀನು //  

ಭಾಹುಗಳ ಬೆಚ್ಚನೆಯ ಸ್ಪರ್ಶ, 
ತೋಳುಗಳ ಮಧುರ ಅಪ್ಪುಗೆ.
ಎದೆಯ ಬಡಿತ, ನಾಡಿಗಳ ಮಿಡಿತ/
ಕಣ್ಣುಗಳ ಸೆಳೆತ, ಹರೆಯದ ಹರಿತ //  

ಏನಲ್ಲ ನೀನು,ಏನಿಲ್ಲ ನಿನ್ನಲಿ....?!

 

ಆಶಿರ್ವದಿಸಿದ ಎರಡು ಆತ್ಮಗಳು,
ಹಂಚಿಕೊಳ್ಳುವ ಅದ್ಬುತ ಉಡುಗೊರೆ/
ಸ್ವರ್ಗವನ್ನೇ ಭುವಿ ಮೇಲೆ ತೆರೆದಿಡುವ 
ಮಧುರ,ಅಮರ ಅನುಭವ//
  
ನಿಮಗೇನನ್ನಿಸುತ್ತದೆ . ದಯವಿಟ್ಟು ತಿಳಿಸಿ. ಪ್ರೀತಿಯೆಂದರೆ ಹಂಚಿಕೊಳ್ಳುವುದು ಅಲ್ವಾ? 


ನಿಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಅಮರವಾಗಲಿ , ನಿಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಸದಾ ಚಾಲ್ತಿಯಲ್ಲಿರಲಿ. 

ಪ್ರೀತಿಯಿಂದ ನಿಮ್ಮವ,

ಲಿಂಗೇಶ್ ಹುಣಸೂರು,
ಬಿಂದುವಿನಿಂದ ಅನಂತದೆಡೆಗೆ..................ನಿಮ್ಮೆಲ್ಲರ ಪ್ರೀತಿಯಿಂದ........ 



Thursday, February 9, 2012

:" ನಿನ್ನ ಹೆಸರು ....................."

ಡಿಯರ್ ಪ್ರೆಂಡ್ಸ್ ನನ್ನ ಮತ್ತು ನನ್ನ ಸಮಕಾಲಿನ ಸ್ನೇಹಿತರ ವಯಸ್ಸು ಕಾಲು ಶತಮಾನ ವನ್ನು ದಾಟಿಯಾಗಿದೆ. ಬ್ರಹ್ಮಚರ್ಯ ದ 
ಹಂತ ವನ್ನು ದಾಟಿ ಒಬ್ಬೊಬ್ಬರಾಗಿ ಎಲ್ಲರೂ ದಾಂಪತ್ಯ ಪರ್ವಕ್ಕೆ ಕಾಲಿಡುತ್ತಿದ್ದಾರೆ. ನನ್ನ ಮಗನಿಗೋ ಬರೋಬ್ಬರಿ 2  ವರ್ಷ 
ಮುಂದಿನ ಫೆಬ್ರವರಿ 25   ಕ್ಕೆ .  ಈ ಕವಿತೆ ಅವನಿಗೆ ನಾಮಕರಣ  (ಹಿಮಘನ  ತೇಜಸ್ ) ಮಾಡುವ ವೇಳೆ  ನನ್ನೊಳಗೆ 
ಮೂಡಿದ ಭಾವ . ಅಪ್ ಕೋರ್ಸ್ ಪ್ರತಿಯೊಬ್ಬ ತಂದೆಯ  ಅಥವಾ ಪೋಷಕರ ಆಶಯ ಇದೆ ಆಗಿರುತ್ತದೆ. ಹಾಗಾಗಿಯೇ ಈ 
ಕವಿತೆಯನ್ನು ಈಗಾಗಲೇ ಜನ್ಮಿಸಿರುವ ಹಾಗು ಮುಂದೆ ಹುಟ್ಟುವ ಎಲ್ಲಾ ನನ್ನ ಗೆಳೆಯ/ತಿ ಯರ ಮಕ್ಕಳಿಗೆ ಸಮರ್ಪಿಸುತ್ತೇನೆ. 
ಹಾಗೆಯೇ ಆರ್ಕುಟ್ ನ ಆತ್ಮಿಯರಾದ ದೀಪ ಮತ್ತು ಹರೀಶ್ ದಂಪತಿಗಳಿಗೆ ಹಾಗು ನನ್ನ ನಲ್ಮೆಯ ಅಕ್ಕ ಸುಲಕ್ಷಣ ಳಿಗೆ 
 ಮಗು ಜನ್ಮಿಸಿವೆ , ಅವರಿಗೂ ನನ್ನ  ಶುಭಾಶಯಗಳು . 

:" ನಿನ್ನ ಹೆಸರು ....................."

 




ಜಗದ ಚರಿತ್ರೆಯಲಿ,
ಯುಗದ ಮಾತುಗಳಲಿ, 
ಹಸಿರಾಗಲಿ ನಿನ್ನ ಹೆಸರು\ 

ಹಡೆದವರ ಖುಷಿಯಾಗಿ, 
ಸಾಧನೆಯಲಿ ಋಷಿ ಯಾಗಿ ,
ಹೆಸರಾಗಲಿ ನಿನ್ನ ಹೆಸರು.\

ಮುಗ್ದ  ನಗುವಿನ ಮೊಗವಾಗಿ,
ಮುದ್ದು ಚೆಲುವಿನ ಸಿರಿಯಾಗಿ,
ಮೆರೆದಾಡಲಿ ನಿನ್ನ ಹೆಸರು\

ಸಿಹಿ ನುಡಿಯ ಜೇನಾಗಿ,
ಸವಿ ನುಡಿಯ ದೊರೆಯಾಗಿ,
ಹರಿದಾಡಲಿ ನಿನ್ನ ಹೆಸರು\


ಕರುನಾಡ ಕನ್ನಡಿಯಾಗಿ,
ಈ ಮಣ್ಣಿನ ಕಣ್ಮಣಿಯಾಗಿ,
ಜಗದಲಿರಲಿ ನಿನ್ನ ಹೆಸರು \




Monday, November 1, 2010

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನಲ್ಮೆಯ ಒಲುಮೆಯ ಕನ್ನಡ ಬಂಧುಗಳಿಗೆ "ಕನ್ನಡ ಹಬ್ಬ " ದ ಶುಭಾಶಯಗಳು.



ಕನ್ನಡ, ಕರ್ನಾಟಕ, ಕನ್ನಡ ಜನ ನಮ್ಮ ಆಸ್ತಿ. ಇಂದು ದೇಶ ವಿದೇಶಗಳಲ್ಲಿ ಕನ್ನಡದ ಕೀರ್ತಿ ಮುಗಿಲೆತ್ತರಕ್ಕೆ ಹಬ್ಬುತ್ತಿದೆ. ಅಂತರ್ಜಾಲದ ಕನ್ನಡ ಮನಸ್ಸುಗಳೆಲ್ಲ ಒಂದಾಗಿವೆ. ಭಾಷೆ ಭಾವನೆಗಳನ್ನು ಬೆಸೆಯುವ ಸಾಧನ. ಅದರಲ್ಲೂ ಕನ್ನಡಕ್ಕಿರುವ ಕಿಮ್ಮತ್ತೆ ಚಂದ. ಸವಿಯಾದ , ಸಿಹಿಯಾದ ಭಾಷೆ, ನಮ್ಮ ಭಾಷೆ. ಕನ್ನಡ , ಕರುನಾಡು ನಮ್ಮ ಹೆಮ್ಮೆ. ಕನ್ನಡಾಂಬೆಗೆ ನಮ್ಮೆಲ್ಲರ ನಮನ.



ಕನ್ನಡ ರಾಜ್ಯೋತ್ಸವದ ಶುಭಾಶಯಗಳು.



ಜೈ ಕರ್ನಾಟಕ ಮಾತೆ.



ಲಿಂಗೆಶ್ ಹುಣಸೂರು.

ಬಿಂದುವಿನಿಂದ ಅನಂತದೆಡೆಗೆ...



ನನ್ನ ಘೋಷ ವಾಕ್ಯ ನನ್ನ ಕರುನಾಡಿಗಾಗಿ .. " ಕನ್ನಡ ಉಸಿರಾಗಲಿ, ಕರುನಾಡು ಹಸಿರಾಗಲಿ"

Monday, October 18, 2010

-+- ಅಲರ್ಜಿ ಮಹಾತ್ಮೆ -+-

ಪ್ರಿಯ ಸ್ನೇಹಿತರೆ,  " ಅಲರ್ಜಿ "  ಯಾತನಮಯವಾದುದು. ಯಾವುದಕ್ಕೂ ಚಿಂತೆ ಮಾಡದೆ ಎಗ್ಗಿಲ್ಲದೆ ಬೆಳೆದ ದೇಹಕ್ಕೆ , ಆಸೆಯ ಮನಸ್ಸಿಗೆ ಅಲರ್ಜಿ ಪೂರ್ಣ ವಿರಾಮ ಇದುವ ದಿವ್ಯಾಸ್ತ್ರ. ಮೊನ್ನೆ ಇದುವರೆಗೂ ಯಾವುದೇ ಅಲರ್ಜಿ ಇಲ್ಲದ ನಾ ಕೂಡ ಇದಕ್ಕೆ ಮುಗ್ಗರಿಸಿಬಿಟ್ಟೆ . ಆ ಸಮಯದಲ್ಲಿ ಅಲರ್ಜಿ ಬಗ್ಗೆ ನನಗನಿಸಿದ್ದು ಹೀಗೆ. ....ಓ ಅಪ್ರಿಯ  ಅಲರ್ಜಿ,  ಏನು ನಿನ್ನ ಲೀಲೆ ?!

ಓ ಅಪ್ರಿಯ  ಅಲರ್ಜಿ,
ಏನು ನಿನ್ನ ಲೀಲೆ ?!


ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ,
ಕಟ್ಟು ನಿಟ್ಟು ಗಳ ಬದಿಗೆ ಸರಿಸಿದ್ದೆ/


ನೀ ಬಂದೆ ಎಲ್ಲಿಂದ,
ಅಹಿತ ಸುಖದ ರೂವಾರಿ, ತುರಿಕೆಯ ರಾಯಭಾರಿ/


ರೋಗ ಬಂದರೆ ದೇಹದ ಒಂದು ಅಂಗಕ್ಕೆ,
ನಿನ್ನ ಲೀಲೆಯೋ ಸರ್ವಾಂಗಕ್ಕೆ/


ಕಡಿತ ಬಂದರೆ ಪರ, ಪರವೇ ಸುಖ,
ಪರ, ಪರ ವೆ ಕಾಯಕವಾದರೆ , ಎಲ್ಲೇ ಇಲ್ಲದ ನರಕ/


ಇನ್ನಾದರೂ ನಡೆಸುವೆ ಶಿಸ್ತುಬದ್ದ ಬದುಕು,
ನಿನ್ನಿಂದ ಕಲಿತೆ ಮಿತಿಯ  ಬಯಕೆ/


ಓ ಅಪ್ರಿಯ  ಅಲರ್ಜಿ,
ಏನು ನಿನ್ನ ಲೀಲೆ ?!

- ಲಿಂಗೆಶ್ ಹುಣಸೂರು (ಚುಕ್ಕಿ )
ಅಲರ್ಜಿಗೆ ಎರಡು ದಿನ ಬಲಿಯಾದ ನಿಮ್ಮ ಗೆಳೆಯ....

Sunday, October 3, 2010

//ಜಾಗೋ ಹಿಂದೂ, ಜಾಗೋ ಭಾರತ್//


ನಾವೆಲ್ಲರೂ ಹಿಂದೂ,
ಒಂದೆಂದು ಸಾರಬೇಕು ಎಂದೆಂದೂ /

ಚರಿತ್ರೆಯ ಶೋಷಣೆಗಳಿಗೆ
ತಿಲಾಂಜಲಿ ಇಟ್ಟು ,
ಜಾತಿ - ಉಪಜಾತಿ
ಗೋಡೆಗಳ ಮೆಟ್ಟಿ,
ಉಳಿಸಬೇಕು ಸನಾತನ ಧರ್ಮ /

"ನಾವು" ಎಂದರೆ "ಹಿಂದೂ " ಅನಬೇಕು,
ನಮ್ಮ ಒಡೆವ ಕಿಡಿಗೇಡಿಗಳ ಮೇಲೆ ,
ರಣಕಹಳೆ ಮೊಳಗಿಸಬೇಕು,
ಧರ್ಮ ಬೆಳೆಸಬೇಕು/

ನೆನ್ನೆ ಮೊನ್ನೆಯದಲ್ಲ
ನಮ್ಮ ಸಂಸ್ಕೃತಿ,
ಹಿಂದುಸ್ತಾನದ ಜೀವ ಶ್ರುತಿ/

ಹಬ್ಬಬೇಕು ಮುಗಿಲೆತ್ತರಕ್ಕೆ,
ಹರಡಬೇಕು ಜಗದಗಲಕ್ಕೆ ,

ಅದಕ್ಕೆ ಮೊದಲು............

ಬೆಳೆಸಬೇಕು ಏಕತಾಭಾವ,
ಕಿತ್ತೊಗೆಯಬೇಕು ಅಸ್ಪೃಶ್ಯತೆಯ ಜಾಲ,
ಒಂದಾಗಬೇಕು,
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ,
ಮೊಳಗಬೇಕು ಶ್ರೀ ರಾಮ ನಾಮ /

ನಾವೆಲ್ಲರೂ ಹಿಂದೂ,
ಒಂದೆಂದು ಸಾರಬೇಕು ಎಂದೆಂದೂ /



ಜೈ ಶ್ರೀರಾಮ್ , ಜೈ ಹಿಂದ್ (ದು )

ಲಿಂಗೆಶ್ ಹುಣಸೂರು,
ಬಿಂದುವಿನಿಂದ ಅನಂತದೆಡೆಗೆ.....