ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Thursday, January 22, 2015

ಪ್ರೀತಿಸ್ತಿದ್ದೀರಾ, ಒದ್ನಿಮಿಷ ಈ ಕಡೆ ಕೇಳಿ.......

ಪ್ರೀತಿಸ್ತಿದ್ದೀರಾ, ಒದ್ನಿಮಿಷ ಕಡೆ ಕೇಳಿ.......

ಪ್ರಿಯರೇ, ವರ್ಷದ ಪ್ರೀತಿದಿನ ಅಕ್ಕರೆಯಿಂದ ಅಪ್ಪಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಪ್ರೀತಿ ಅನ್ನೋದು ವ್ಯಾಖ್ಯಾನಗಳಿಗೆ ನಿಲುಕದ ವಿಶಿಸ್ಟ ಭಾವನೆ. ಅದು ಎಸ್ಟು ವಿಶಿಸ್ಟವೋ ಅಸ್ಟೇ ವಿಚಿತ್ರ. ಅದು ವಿಭಿನ್ನ ಮುಖಗಳನ್ನು ವಿಭಿನ್ನ ಆಯಾಮಗಳನ್ನು ಒಳಗೊಂಡಿದೆ. ಇವೆಲ್ಲದರ ನಡುವೆ ನಮ್ಮ ನಿಜವಾದ ಮುಖವನ್ನು/ವ್ಯಕ್ತಿತ್ವವನ್ನು ಮರೆಯಬಾರದು. ಹಾಗಾಗಿ ಪ್ರೀತ್ಸೊರಿಗಾಗಿ ಪ್ರೀತಿಯಿಂದ ಒಂದೆರಡು ಮಾತ್ಗಳು. ಹೃದಯ ತೆರೆದು ಕೇಳಿಸ್ಕೊಳ್ಳಿ.....

1. ಪ್ರಾಮಾಣಿಕವಾಗಿ ಪ್ರೀತಿಸಿ. ಉಸಿರಿರೊವರೆಗು ಅದನ್ನು ಉಳಿಸಿಕೊಳ್ಳಿ. ಇಲ್ಲಾ ಅಂದ್ರೆ ಉಸಿರಾಟದ ತೊಂದರೆಗಳು ಕಾಣಿಸ್ಕೊಳ್ತಾವೆ.

2. ಅವಶ್ಯಕತೆ ಅಥವಾ ಅನಿವಾರ್ಯತೆಗಾಗಿ  ದಯವಿಟ್ಟು ಪ್ರೀತಿಸ್ಬೇಡಿ ಅಥವಾ ಅವಶ್ಯಕತೆ-ಅನಿವಾರ್ಯತೆಯನ್ನು ಪ್ರೀತಿಯಾಗಿ ಮಾರ್ಪಡಿಸಿಕೊಳ್ಳಬೇಡಿ. ಹಾಗಾದರೆ ಅದು ನೀವು ನಿಮಗೆ ಪರಸ್ಪರ ಮಾಡಿಕೊಳ್ಳುವ ಮೋಸ.

3.ಪ್ರೀತಿ ಎನ್ನುವುದು ಜಾತಿ-ಮತ, ಚೆಲುವು-ನಲಿವು,ಭಾಷೆ-ಪ್ರ್ರಾಂತ್ಯ-ಪ್ರಬುದ್ದತೆ-ಬುದ್ದಿವಂತಿಕೆ-ಸೌಂದರ್ಯ-ಸಿರಿತನ ಇವೆಲ್ಲದರಾಚೆಗಿನ ಮಧುರ-ಅಮರ ಭಾವನೆ. ಯಾರೂ ಯೋಚಿಸಿ ಪ್ರೀತಿಸುವುದಕ್ಕಾಗೋದಿಲ್ಲ. ಆದ್ರೆ ಪೀತಿಸಿದ ಮೇಲೆ ಇವೆಲ್ಲದರ ಬಗ್ಗೆ ಖಂಡಿತ ಯೋಚಿಸ್ಭೇಡಿ. ನೆಮ್ಮದಿ ಹಾಳಾಗುತ್ತದೆ.

4.ಪ್ರೀತಿಗೆ ಎಲ್ಲಾ ಅಡೆತಡೆಗಳನ್ನು ಮೀರುವ ಶಕ್ತಿ ಇರುತ್ತದೆ. ಜೊತೆಗೆ ಆರ್ಥಿಕ ಸ್ವಾತಂತ್ರ ಗಳಿಸ್ಕೊಳ್ಳಿ. ಆಗ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಶಕ್ತರಾಗ್ತೀರಿ.ಆದ್ರೆ ಅಡೆ ತಡೆಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ನಿಮ್ಮ ಪ್ರೀತಿಯನ್ನು ಬಲಿಕೊಡಬೇಡಿ.

5.ಕಾಮವಿಲ್ಲದ ಪ್ರೇಮ ಪರಿಪೂರ್ಣವಾಗಲಾರದು ಎಂಬ ಮಾತಿದೆ. ಆದರೆ ಒದುವ ದಿನಗಳಲ್ಲಿ ಅದಕ್ಕೆ ಆಸ್ಪದ ಕೊಡಬೇಡಿ.

6.ಪ್ರೀತಿ ಯಾರನ್ನು ಮುಳುಗಲು ಬಿಡುವುದಿಲ್ಲ. ಪಾರ್ಕು,ಗಿಪ್ಟು,ಕಾಡುಹರಟೆ,ಹೊಟೆಲ್ಲು,ಪಿಕ್ನಿಕ್,ಕಿಕ್ಕು ಗಳೆಂಬ ಮಾಯೆಗಳಲ್ಲಿ ಮುಳುಗಿಹೋಗಬೇಡಿ. ಎಲ್ಲವೂ ಹಿತಮಿತವಾಗಿದ್ದರೆ ಪ್ರೀತಿ ನಿಮಗೆ ಹಿತನೀಡುತ್ತದೆ.

7. ತಮ್ಮ ಪ್ರೀತಿಪಾತ್ರರ ಬಗ್ಗೆ ಅತಿಯಾದ ಪೊಸೆಸಿವ್ ಆಗಿಬಿಡಬೇಡಿ. ಅದು ಬಂಧನವಾಗಿ ನಿಮ್ಮ ಭಾಂದವ್ಯಕ್ಕೆ ಕುತ್ತು ಬರಬಹುದು.

8. ಪ್ರೀತಿ ಅನ್ನೋದು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಆದ್ರೆ ಬಂದ್ಮೇಲೆ ನಿಮ್ಮ ಜವಾಬ್ದಾರಿಗಳನ್ನ/ಕರ್ತವ್ಯಗಳನ್ನ ನಿರ್ಲಕ್ಷಿಸಬೇಡಿ.

9. ನೀವು ನಿಜಕ್ಕೂ ಯಾರನ್ನಾದರೂ ಪ್ರೀತಿಸುತ್ತಿದ್ದರೆ , ಪ್ರೀತಿಯ ಭಾವ ಗಟ್ಟಿಯಾಗಿದ್ದರೆ ಬಿಗುಮಾನ ಬಿಟ್ಟು ಅವರಿಗೆ ಹೇಳಿಬಿಡಿ. ಮನಸ್ಸಿನಲ್ಲಿಟ್ಟುಕೊಂಡು ಕೊರಗಬೇಡಿ. ಇಲ್ಲಾಂದ್ರೆ 'ಪ್ರಯಾಣದ ನಂತರ ಟಿಕೇಟು' ಖರೀದಿಸಿದ ಹಾಗೆ ಆಗುತ್ತೆ.

10.ಪ್ರೀತಿಸಿದ ಮೇಲೆ ನಂಬಿಕೆ,ಧ್ಯರ್ಯ,ಸಹನೆಗಳನ್ನು ಸದಾ ನಿಮ್ಮೊಟ್ಟಿಗೆ ಇಟ್ಟುಕೊಳ್ಳಿ. ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಇವು ಬಹಳ ಮುಖ್ಯ.

11. ಒಂದು ವೇಳೆ ನಿಮ್ಮನ್ನು ಪ್ರೀತಿಸಿದ ಜೀವ ಬಿಟ್ಟುಹೋದರೆ ನೀವು ಜೀವ ಬಿಡಬೇಡಿ. 'ನಮ್ಮ ಬದುಕಿನಲ್ಲಿ ಅವರ ಪಾತ್ರ ಅಸ್ಟೆ' ಅಂತಾ ಅಂದುಕೊಳ್ಳಿ.ವಿಧಿಯನ್ನು ಹಳಿಯುತ್ತಾ ನೀವು ಕಳೇಬರ ವಾಗಬೇಡಿ. 'ಭಗ್ನ ಪ್ರೇಮವು ಸಾಧನೆಗೆ  ಸ್ಪೂರ್ತಿಯಾಗಬಲ್ಲದು'.

12.ಪ್ರೀತಿಸಿದ ಹುಡುಗ/ಗಿ ಮೋಸ ಮಾಡಿದ ತಕ್ಷಣ ಅವರನ್ನು ದ್ವೇಷಿಸಬೇಡಿ. ಅವರ ಬಗ್ಗೆ ಇಲ್ಲಸಲ್ಲದ ಅಪವಾದಗಳನ್ನು ಮಾಡಬೇಡಿ. ನೀವು ನಿಜವಾಗಿ ಪ್ರೀತಿಸಿದ್ದೇ ಆದರೆ 'ಪ್ರೀತಿಸಿದ ಜೀವ ಚೆನ್ನಾಗಿರಲಿ' ಎಂದು ಹಾರೈಸಿ ನಿಮ್ಮ ದೊಡ್ಡತನ ಮೆರೆಯಿರಿ. ಕಹಿಯೋ, ಸಿಹಿಯೋ ಅಧ್ಯಾಯವನ್ನು ನಿಮ್ಮ ಬದುಕಿನ ಪುಸ್ತಕದಿಂದ ಡಿಲೀಟ್ ಮಾಡಿ ಮಸ್ತಕವನ್ನು ಸುಸ್ತಿತಿಯಲ್ಲಿಟ್ಟುಕೊಳ್ಳಿ.

13.ಪ್ರೀತಿಯ ಹೆಸರಲ್ಲಿ ಒಂದು ಮುಗ್ಧ ನಂಬಿಕೆಯನ್ನು ಬಲಿಕೊಡಬೇಡಿ.ಪ್ರೀತಿಯನ್ನು ಗೌರವಿಸಿ,ಅಕ್ಕರೆಯಿಂದ ಪೋಷಿಸಿ.
14. ಬದುಕಿನಲ್ಲಿ ಕೆಲವು 'ಯಾಕೆ' ಗಳಿಗೆ ಉತ್ತರ ಸಿಗೋದಿಲ್ಲ. ಉತ್ತರ ಹುಡುಕುವ ಪ್ರಯತ್ನ ಮಾಡದೆ, ಬದುಕು ಬಂದಂತೆ ಸ್ವೀಕರಿಸಬೇಕು. ಪ್ರೀತಿಸಿದ ಮೇಲೆ ಪ್ರತೀ ಕ್ಷಣದ ಬದಲಾವಣೆಗಳನ್ನು ಎದುರಿಸಲು ಸಿದ್ದರಾಗಿರಬೇಕು.

ಸದ್ಯಕ್ಕೆ ಸಾಕು ಇಸ್ಟು. ನಿಮ್ಮಗಳ ಪ್ರೀತಿಗೆ ನಮ್ಮ ಶುಭಾಷಯಗಳು. ಪ್ರೀತಿಯ ಬಗೆಗೆ ಮತ್ತಸ್ಟು ಟಿಪ್ಸ್ ಬೇಕೆಂದ್ರೆ ಪ್ರೀತಿಯಂದ ಪತ್ರ ಬರೆಯಿರಿ. ಪ್ರೀತಿಯ ಟ್ರಿಪ್ ಗೆ ನಿಮ್ಮನ್ನ ನಮ್ಮ ಅಕ್ಕರೆಯ ಲೇಖನಗಳ ಮೂಲಕ ಕರ್ಕೊಂಡ್ ಹೋಗ್ತೀವಿ.ಅಲ್ಲಿಯವರೆಗೆ ನಿಮ್ಮ ಪ್ರೀತಿಯಿರಲಿ..


ಎಲ್ಲರಿಗೂ ಪ್ರೀತಿ ದಿನದ ಶುಭಾಷಯಗಳು.


ಲಿಂಗೇಶ್ ಹುಣಸೂರು

Saturday, March 22, 2014

30 ನೇ ವರ್ಷದ ಹೊಸ ಮುಂಜಾವಿಗೆ ನನ್ನ ಬದುಕಿನ ಪುಟಗಳು...

ಡಿಯರ್ ಪ್ರೆಂಡ್ಸ್ ನಮಸ್ತೆ,

ಮಾರ್ಚ್ 24,  ಸಾವಿರದ ಎಂಬತೈದನೆ ಯ ಇಸವಿ(1985). ಅಂದು 23 ಕ್ಕೆ ಯುಗಾದಿ ಹಬ್ಬ ಬಂದಿತ್ತು. ಮಾರನೆಯ ದಿನ ಸಾಮಾನ್ಯವಾಗಿ ವಿಶೇಷ ಅಡುಗೆ ಮಾಡುತ್ತಾರೆ. ಆ ವರ್ಶದ ಆ ದಿನ ನಮ್ಮ ಮನೆಯಲ್ಲಿ ವಿಶೇಷ ಸಂಭ್ರಮ. ಆ ವಿಶೇಷವೆ    " ನಾನು". ಲಿಂಗೇಶ್ ಅಂತ ಅಪ್ಪ ಇಟ್ಟ ಹೆಸರು ಮತ್ತು "ಚುಕ್ಕಿ...ಬಿಂದುವಿನಿಂದ ಅನಂತದೆಡೆಗೆ..." ಅಂತಾ ನನಗೆ ನಾನೆ ಇಟ್ಟುಕೊಂಡ ಹೆಸರು.

2014 ಮಾರ್ಚ್ ಮಾಸಕ್ಕೆ ಸರಿಯಾಗಿ ಬರೊಬ್ಬರಿ ನನ್ನ ಬದುಕಿನ 29 ವರ್ಶಗಳು ಕಳೆದುಹೋಗುತ್ತವೆ . ಮುವತ್ತರ ಹೊಸ ಸೂರ್ಯ ಮಾರ್ಚ್24 ಕ್ಕೆ ಉದಯಿಸುತ್ತಾನೆ, ಕಳೆದ ಬದುಕಿನ ಹಗಲು-ರಾತ್ರಿಗಳ ನೆನಪಿಸಿಕೊಂಡು, ಹೊಸ  ದಿನ, ಹೊಸ ಭಾವ, ಹೊಸಕನಸು, ಹೊಸ ಕನವರಿಕೆಗಳಿಗೆ ಬದುಕನ್ನ ತೆರೆದುಕೊಳ್ಳಲು ಮೌನವಾಗಿ ನಾನು ಆ ದಿನವನ್ನು ಬರಮಾಡಿಕೊಳ್ಳುತ್ತೇನೆ ಮತ್ತು ನೀವು ಕರೆ ಮಾಡಿ ಹೇಳುತ್ತೀರಿ, ಸಂದೇಶ ಕಳುಹಿಸುತ್ತೀರಿ. "ಹುಟ್ಟು ಹಬ್ಬದ ಶುಭಾಷಯಗಳು ಗೆಳೆಯ" ಮತ್ತು ನಾನು ತಿಳಿಸುತ್ತೇನೆ , ನನ್ನ ಮೌನ ಕೃತಘ್ಜ್ನತೆಗಳು ಎಲ್ಲರಿಗೂ , ಎಲ್ಲವಕ್ಕೂ ..., ಸಿಹಿ ನೆನಕೆಗಳು, ಅನಂತ ಧನ್ಯವಾದಗಳು.

ಇನ್ನೇನೊ  ಕೆಲವೇ ದಿನಗಳಲ್ಲಿ ಯುಗಾದಿ ಅರಸಿ ಬರುತ್ತಿದೆ ನಮ್ಮಗಳ ನಲಿವಿಗೆ...


ಯುಗ ಯುಗಗಳು ಕಳೆದರು ಯುಗಾದಿ ಮರಳಿ ಬರುತಿದೆ, ಹೊಸ ವರ್ಷ, ಹೊಸ ಸಂತಸ, ಉಲ್ಲಾಸ, ಉತ್ಸಾಹ, ಹೊಸ ಕನಸು, ಹೊಸ ವಸಂತ. ಎಲ್ಲವು ಹೊಸತು, ನಿತ್ಯ ನೂತನ ವಿನೂತನ ಸಂತಸದ ಹೂರಣ, ಜೊತೆಗೆ ನೋವು- ನಲಿವುಗಳ ಸಮ್ಮಿಲನ, ಬೇವು - ಬೆಲ್ಲದ ಸವಿಗಾನ.



ಆತ್ಮಿಯರೇ, ತಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.



ಜೊತೆಗೆ ಯುಗಾದಿಯ ಬೆನ್ನಲ್ಲೇ ನನ್ನ ಬದುಕಿನ ಹೊಸ ವರ್ಷ ಪ್ರಾರಂಭ . ಮಾರ್ಚ್ ೨೪ ರಂದು  ನನ್ನ ಬದುಕಿನ ಮತ್ತೊಂದು ಹೊಸ ವಸಂತ ನನ್ನ ಬದುಕಿನ ಅಂಗಳಕ್ಕೆ ಬಂದು ನಿಂತಿದೆ.

ದಿನಗಳು, ವರ್ಷಗಳು ಅದೆಷ್ಟು ಬೇಗ ಸರಿದುಹೊಗುತ್ತಿವೆ ಅನ್ನಿಸುತ್ತಿದೆ.

ನನಗೀಗ ಬರೋಬ್ಬರಿ ೨೯ ವರ್ಷಗಳು, ಜೊತೆಗೆ ಒಬ್ಬಳು ಮಡದಿ, ಮುದ್ದಾದ ಈರ್ವರು ಮಕ್ಕಳು, ವೃತ್ತಿಗೆ ಅಂಚೆ ಇಲಾಖೆ, ಪ್ರವೃತ್ತಿಗೆ ಸಾಹಿತ್ಯ, ಸಮಾಜಮುಖಿಯಾದ ಕೆಲವೊಂದಿಷ್ಟು ಕೆಲಸಗಳು, ಅಪ್ಪ , ಅಮ್ಮ, ತಮ್ಮ, ಗೆಳೆತನಕ್ಕೆ ನಿಮ್ಮಂತ ಸಾವಿರಾರು ಸಹೃದಯ ಹೃದಯಗಳು.



 ಬದುಕು ಧನ್ಯ. ಜೊತಗೆ ಅನಂತದೆಡೆಗೆ ನನ್ನ ಹೆಜ್ಜೆಗಳು.....


ಈ ಸಂದರ್ಭದಲ್ಲಿ ನನ್ನ ಇಷ್ಟು ವರ್ಷದ ಬದುಕಿನ ಅಂಗಳಕ್ಕೆ ಕಾಲಿರಿಸಿದ , ನನ್ನ ಬದುಕಿನ ಹಾದಿಯಲ್ಲಿ ಎದುರಾದ ಎಲ್ಲಾ ಸಹೃದಯರನ್ನು, ಘಟನೆಗಳನ್ನು ನೆನೆಸಿಕೊಳ್ಳುವುದು ನನ್ನ ಕರ್ತವ್ಯ.

ಎಲ್ಲರಿಗೂ , ಎಲ್ಲವಕ್ಕೂ ನನ್ನ ಕೃತಜ್ಞತೆಗಳು, ಸಿಹಿ ನೆನಕೆಗಳು, ಅನಂತ ಧನ್ಯವಾದಗಳು.

ಮುಂದಿನ ದಿನಗಳಲ್ಲೂ ನನ್ನ ಕನಸುಗಳೊಟ್ಟಿಗೆ ನೀವಿರುತ್ತೀರೆಂಬ ಆಶಯದೊಂದಿಗೆ ನಿಮ್ಮೆಲ್ಲರಿಗೂ ಹೊಸ ವಸಂತದ ಶುಭಾಶಯಗಳು.

ಕನಸುಗಳೋಟ್ಟಿಗೆ ಕೈ ಜೋಡಿಸಿ ,
       ತಾರೆಗಳನ್ನು ಎಟುಕಿಸೋಣ....................

ನಿಮ್ಮವ ,ನಿಮ್ಮಲ್ಲೊಬ್ಬ,
--
* ಚುಕ್ಕಿ*
ಬಿಂದುವಿನಿಂದ ಅನಂತದೆಡೆಗೆ..........
(ಕನ್ನಡ ಉಸಿರಾಗಲಿ..ಕರುನಾಡು ಹಸಿರಾಗಲಿ)

Thursday, February 13, 2014

ಪ್ರೀತಿ.....ಕನಸು.....ಕನವರಿಕೆ....ಮತ್ತು ಇನ್ನು ಹಲವು........!!!

ಆತ್ಮೀಯ ಪ್ರೀತಿ ಪಾತ್ರ ಎಲ್ಲಾ  ಗೆಳೆಯರ ಬಳಗಕ್ಕೆ ಪ್ರೀತಿ ದಿನದ ಶುಭಾಷಯಗಳು.


ನಾನು ಪ್ರೀತಿಸಿದ್ದೆ................!!!

ಎಂದು ನನ್ನ ಮಡದಿಯ ಮುಂದೆ ಆತ್ಮನಿವೇದನೆ ಮಾಡಿಕೊಳ್ಳುವಾಗ ನನ್ನಲ್ಲಿ ದೀರ್ಘ ನಿಟ್ಟುಸಿರು. ಎಲ್ಲವನ್ನು ಕೇಳಿದೆ ಆಕೆ ಹೇಳಿದ್ದು. " ರೀ ನೀವು ನನಗೆ ೬ ವರ್ಷದ ಕೆಳಗೆ ಸಿಗಬೇಕಿತ್ತು. ನೀವು ಪ್ರೀತಿಸುತ್ತಿದ್ದ ಆ ಹುಡುಗಿ ಗ ಜಾಗದಲ್ಲಿ ನಾನಿರಬೇಕಿತ್ತು. ಆದರೆ ಆಕೆಯ ಹಾಗೆ ನಿಮ್ಮನ್ನ ನಾನು ಬಿಟ್ಟುಹೋಗ್ತಿರಲಿಲ್ಲ. ಎನೇ ಬಂದರು ಎದುರಿಸಿ ನಿಮ್ಮನ್ನೆ ಮದುವೆ ಆಗುತ್ತಿದ್ದೆ". ಅವಳ ಮಾತು ಕೇಳುತ್ತಿದ್ದ ಹಾಗೆ ನನ್ನ ಕಣ್ಣಂಚುಗಳು ಒದ್ದೆಯಾದವು. ಆಕೆಯ ಹಣೆಗೊಂದು ಹೂ ಮುತ್ತು ಕೋಟ್ಟೆ. ಕಣ್ಣೀರು ಕೆನ್ನೆಗಿಳಿಯುತ್ತಿತ್ತು. ಹರೆಯದ ದಿವ್ಯವಾದ ನೆನಪುಗಳು ಮೌನದ ಮೊರೆ ಹೋಗಿದ್ದವು. ಕಣ್ಣೆದುರಿಗಿನ ಪ್ರೀತಿ ಧನ್ಯತೆ ಮೆರೆದಿತ್ತು.


ಮುದ್ದಿನ ಮಡದಿಯ ವಿಶಾಲ ಮನೋಭಾವ, ಪರಸ್ಪರ ಅರ್ಥಮಾಡಿಕೊಳ್ಳುವ, ಆಗಿ ಹೋದ ಘಟನೆಗಳನ್ನು ಕ್ಷಮಿಸುವ ಉದಾರ ಮನಸ್ಸು, ಇರುವುದನ್ನು ಇರುವ ಹಾಗೆ ಒಪ್ಪಿಕೋಳ್ಳುವ ಹೃದಯ ವೈಶಾಲ್ಯ, ಮಗುವಿನ ಮುಗ್ಢತೆ, ಪ್ರೀತಿಯಲ್ಲಿನ ನಂಬಿಕೆ ಇವೆಲ್ಲವು ಗಳು ನಮ್ಮ ಒಲವನ್ನು ಗಟ್ಟಿಗೊಳಿಸಿವೆ. ನಮ್ಮ ಬದುಕಿನಲ್ಲಿ ಧನ್ಯತೆ ಮೂಡಿಸಿದೆ.


ಹರೆಯದಲ್ಲಿ ಪ್ರತಿಯೊಬ್ಬರ ಬದುಕಿನಲ್ಲಿ ಪ್ರೀತಿಯ ಸಿಹಿ ಗಾಳಿ ಬೀಸಿಯೆ ಇರುತ್ತದೆ. ಅದು ಹೃದಯದಿಂದ ಮೊಡಿದ್ದೆ ಆಗಿದ್ದರೆ ಸುಂದರ ಬದುಕಿಗೆ ಮುನ್ನುಡಿಯಾಗುತ್ತದೆ. ಕೆಲವು ವೇಳೆ ಇನ್ಪ್ಯಾಚುಯೇಶನ್, ಜಾತಿಯ ಒಳಸುಳಿ, ಪೋಷಕರ ಮೇಲಿನ ವ್ಯಾಮೋಹ , ನಮ್ಮಗಳ ಅಹಂಕಾರ ಇತ್ಯಾದಿ ಕಾರಣಗಳಿಗೆ ಬಿರುಗಾಳಿಯಾಗಿ ಪರಿವರ್ತನೆಯಾಗಿಬಿಡುತ್ತದೆ.

ನನ್ನ ಬದುಕಿನಲ್ಲಿ ಪ್ರೀತಿಯ ವಿವಿಧ ಮಜಲುಗಳನ್ನು ಅನುಭವಿಸಿದ್ದೇನೆ. ಹಲವು ಗೆಳೆಯರ ಬದುಕಿನ ಪ್ರೀತಿ ಚಿತ್ರಣಗಳನ್ನು ಕಣ್ಣಾರೆ ಕಂಡಿದ್ದೇನೆ. ಇವೆಲ್ಲದರ ಆಸರೆಯಿಂದಲೆ ಒಂದು ಕಾದಂಬರಿ ಬರೆಯಹೊರಟಿದ್ದೇನೆ. ಅದುವೇ " ಬಿಟ್ಟುಹೋದವಳಿಗೊಂದು ಥ್ಯಾಂಕ್ಸ್ ".  ಅವಳು ಬಿಟ್ಟು ಹೋಗಿದ್ದರಿಂಗಲೇ ನನಗೆ ನನ್ನ ಬದುಕಿನ ಸ್ಪೂರ್ಥಿಸೆಲೆ, ಜೀವ ಸಖಿ ಮಡದಿ ಲಕ್ಶ್ಮಿ ಸಿಕ್ಕಿದ್ದು. ಅದು ಕೂಡ ಪ್ರೀತಿಯಿಂದಲೆ ಅದಂತದ್ದು. ಬಹಶ: ಎಲ್ಲಾ ಪ್ರೀತಿಸುವ ಹುಡುಗಿ/ಹುಡುಗರು ಬಿಟ್ಟು ಹೋಗುವಾಗ " ನನಗಿಂದ ಒಳ್ಳೆಯ ಹುಡುಗ/ಹುಡುಗಿ ಸಿಗುತ್ತಾರೆ, ನನ್ನನ್ನು ಮರೆತುಬಿಡು " ಅಂತಲೇ ವಿಧಾಯದ ಬೀಳ್ಕ್ಕೊಡುಗೆ ಮಾತುಗಳನ್ನಾಡುತ್ತಾರೆ. ಬಹುಷ: ಆ ಹಾರೈಕೆ ನನ್ನ ಬದುಕಿನಲ್ಲಿ ನಿಜವಾಗಿದೆ. ಅದಕ್ಕೆ ಅವಳಿಗೆ ಥ್ಯಾಂಕ್ಸ್.


ವಿಪರ್ಯಾಸ ಎಂದರೆ ಪ್ರೀತಿಸುತ್ತಿದ್ದ ದಿನಗಳಲ್ಲಿ ಇದ್ದ ಇಲ್ಲಾ ಪಾತ್ರಗಳು ಬೆಂಗಳೂರಿನಲ್ಲಿಯೆ ನೆಲೆಸಿವೆ. ಪ್ರೀತಿಸಿದ್ದ ಹುಡುಗಿಗೆ ಮಧುವೆಯೂ ಆಗಿದೆ. ಮಕ್ಕಳೂ ಕೂಡ. ಆದರೆ ಆಕೆ ತಾನು ಪ್ರೀತಿಸಿದ್ದ ಹುಡುಗನನ್ನೆ ಅವಳ ಮಧುವೆಗೆ ಕರೆಯಲಿಲ್ಲ. ನಾನು ಕೂಡ ಅವಳು ಮಧುವೆಯಾದ ಕೆಲವೆ ದಿನಗಳಲ್ಲಿ ಸ್ಪರ್ಧೆಗೆ ಬಿದ್ದವನಂತೆ ಪ್ರೀತಿಸಿಯೆ ಮಧುವೆಯಾದೆ. ಅದು ಕೆಲವೇ ಕ್ಷಣಗಳ ಪ್ರೀತಿ, ಕೆಲವೆ ದಿನಗಳಲ್ಲಿ ಸಿಂಧು ವಾಯಿತು. ಈಗ ನನಗೆ ಇಬ್ಬರು ಮಕ್ಕಳು. ಸುಂದರ ಸಂಸಾರ. ಆದರೆ ನೆನಪುಗಳು ಸಾಗರ.


ಇನ್ನೋ ಹೇಳುವ ಭಾವಗಳು , ಆಡದ ಮಾತುಗಳು ಬಹಳಸ್ಟಿವೆ. ಬಟ್ ನಿಮಗು ಕೆಲವು ಸುಂದರ ನೆನಪುಗಳಿವೆ.ಪ್ರೀತಿಯ ಒಡನಾಟವಿದೆ. ಅವನ್ನು ಭಾವಿಸಿಕೊಳ್ಳಿ. ಮತ್ತೆ ಸಿಗುವ.

ನಿಮ್ಮ ಪ್ರೀತಿ ನಿಮ್ಮನ್ನು ಸದಾ ಸಂತಸದಿಂದಿರಿಸಲಿ.
ನಿಮ್ಮ ಒಲವು ನಗುವ ಪ್ರತಿ ದಿನವು ಪ್ರೀತಿ ದಿನವಾಗಲಿ.
ಸುಂದರ ಕ್ಷಣಗಳು ನಿಮ್ಮ ಬದುಕಿನಲ್ಲಿ ಸದಾ ತುಂಬಿರಲಿ.

ನಿಮ್ಮವ...

ಚುಕ್ಕಿ.....
ಬಿಂದುವಿನಿಂದ ಅನಂತದೆಡೆಗೆ......


Wednesday, February 5, 2014

ಒಲವಿನ ಯಾತ್ರೆಗೆ ಒಪ್ಪಂದವಾಗಿ ಐದು ವರ್ಷಗಳು.....



ಆತ್ಮಿಯರೆ,
ಬ್ರಹ್ಮಚರ್ಯದಿಂದ ಗೃಹಸ್ಠಾಶ್ರಮಕ್ಕೆ ಕಾಲಿರಿಸಲು, ಹೊಸಬದುಕಿಗೆ ಅಣಿಯಾಗಲು "ಒಪ್ಪಂದ ಶಾಸ್ತ್ರ" ಮಾಡಿಕೊಂಡು ಇಂದಿಗೆ ೫ ವರ್ಷಗಳು. ಈ ಐದು ವರ್ಷಗಳಲ್ಲಿ ಪ್ರಾಮಾಣಿಕ ವಾಗಿ ನನ್ನ ಮಡದಿ/ಮನದನ್ನೆ "ಲಕ್ಷ್ಮಿ" ಯನ್ನು ಪ್ರೀತಿಸಿದ್ದೇನೆ. ಸುಗುಣಶೀಲೆ ನನ್ನವಳು. ಮಲ್ಲಿಗೆ ಹೂವಿನ ಮನಸಿನಂತವಳು. ಎಲ್ಲಿ ಅತಿಯಾದ ಒಲವಿರುತ್ತದೆಯೋ ಅಲ್ಲಿ ಮುನಿಸು/ಕೋಪ/ಸಣ್ಣ ಜಗಳ ಇದ್ದೇ ಇರುತ್ತದೆ. ಅವೆಲ್ಲವನ್ನು ಮೀರಿ ಪ್ರೀತಿ ನಮ್ಮ ಕೈ ಹಿಡಿದು ಈ ೫ ವರ್ಷಗಳು  ನಡೆಸಿದೆ. ಮುಂದೆಯೂ ಕೂಡ. ಜೊತೆಗೆ ಮಗ ಹಿಮಘನ ತೇಜಸ್ಸ್ ಮತ್ತು ಇನ್ನೂ ಹೆಸರಿಡದ ನನ್ನ ಎರಡನೆ ಕನಸು/ಹಸುಗೂಸು, ಚಂದದ ಬಂಧು ಬಳಗ, ಅಪಾರ ಮಿತ್ರ ವರ್ಗ, ಸಾಹಿತ್ಯ ಪ್ರೀತಿ ಇವೆಲ್ಲದರ ಜೊತೆಗೆ ನನ್ನ ಬದುಕಿನ ರಥ ಮುಂದೆ ಸಾಗುತ್ತಿದೆ.


ಅಂದು ನನ್ನ ಬದುಕಿನ ಅಂಗಳಕ್ಕೆಕಾಲಿರಿಸಿದ ಹುಡುಗೆ, ಇಂದು ನನ್ನ ಮನೆ-ಮನದ ಬೆಳಕಾಗಿ, ಬದುಕನ್ನು ಸುಂದರಗೋಳಿಸಿದ್ದಾಳೆ. ನನ್ನ ಬದುಕು ಆಕೆಯಿಂದ ಪರಿಪೂರ್ಣ.

ನನ್ನ ಕನಸುಗಳೆಲ್ಲಾ ಕೈಗೂಡುವ ಯಾತ್ರೆಯಲಿ ಸಿದ್ದಿಸುವ ಧನ್ಯತೆಯೂ ನನ್ನಾಕೆ.

ನಮ್ಮ ಒಲವಿಗೆ ನಿಮ್ಮ ಆಶಿರ್ವಾದ ಶ್ರೀರಕ್ಷೆಯಿರಲಿ ಮತ್ತು ನಿಮ್ಮಗಳ ಪ್ರೀತಿಯಿರಲಿ.

ನಿಮ್ಮವ

ಚುಕ್ಕಿ...........

Tuesday, December 31, 2013

ಹೊಸ ವರ್ಷದ ಶುಭಾಷಯಗಳು

ಡಿಯರೆಸ್ಟ್/ಆತ್ಮೀಯ/ಅಭಿಮಾನದ /ಅಕ್ಕರೆಯ ಗೆಳೆಯರೆ, ತಮ್ಮೆಲ್ಲರಿಗು ಹೊಸ ವರ್ಷದ ಶುಭಾಷಯಗಳು.

ತಮ್ಮೆಲ್ಲರ ಬದುಕಿನಲ್ಲಿ ಸಂತಸ,ಸಮೃದ್ದಿ,ಸೌಖ್ಯ,ನೆಮ್ಮದಿ, ಅಭಿವೃದ್ದಿ ನೆಲೆಯೂರಲಿ. 
ಹೊಸ ಕನಸುಗಳು ಅರಳಲಿ.
ಗೆಳೆತನ ಚಿಗುರೊಡೆಯಲಿ.
ಗೆಲುವು ನಿಮಗೊಲಿಯಲಿ.
ನೀವು ಇಡುವ ಪ್ರತಿ ಹೆಜ್ಜೆಯೂ ಸಾಧನೆಯಾಗಲಿ.

ಹೀಗೆ ಪ್ರತಿ ಕ್ಷಣವೂ ಹೊಸ ವರ್ಷದ ಹೊಸ ದಿನಗಳಲ್ಲಿ ನಿಮಗಾಗಿ ಪ್ರಾರ್ಥಿಸುತ್ತೇನೆ.


ಅಪಾರ ಪ್ರೀತಿಯಿಂದ ನಿಮ್ಮವ,

ಲಿಂಗೇಶ್ ಹುಣಸೂರು (ಚುಕ್ಕಿ)
ಬಿಂದುವಿನಿಂದ ಅನಂತದೆಡೆಗೆ..............

Tuesday, December 24, 2013

ಕಾಣದ ಕಡಲಿಗೆ ಹಂಬಲಿಸಿದೆ ಮನ...... ನೆಚ್ಚಿನ ಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಶ್ರದ್ದಾಂಜಲಿ


ನೆಚ್ಚಿನ ಕವಿ ಜಿ.ಎಸ್. ಶಿವರುದ್ರಪ್ಪನವರ ಭಾವಗೀತೆಗಳು ಬೆಳಗ್ಗಿನಿಂದಲೂ ಮನದಲ್ಲಿ ಜಿನುಗುಡುತ್ತಿವೆ.  

ಮೈಸೂರಿನ ಮಹಾರಾಜ ಕಾಲೇಜಿನ ಅಂಗಳದಲ್ಲಿ ಸಾಹಿತ್ಯದ ಕಂಪಿದೆ. ಕನ್ನಡ ನಾಡಿನ ಹಲವಾರು ಸಾಹಿತ್ಯ ಬ್ರಹ್ಮರು ಓದಿದ, ಅಧ್ಯಾಪಕರಾಗಿದ್ದ ಕಾಲೇಜು ಅದು. ಸಾಹಿತ್ಯ-ಸಂಸ್ಕೃತಿ-ಕಲೆ ಗಳು ಮೇಳೈಸುವ ಸಕಲ ಕಲಾ ವಲ್ಲಭರು ಇರುವಂತಹ ನೆಲೆ ಅದು. ಅಂತಹ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಭಾಗ್ಯ ನನ್ನದು. ಹಾಗಾಗಿಯೆ ನನ್ನ ಭಾವಲೋಕದ ಜೊತೆಗೆ ಸಾಹಿತ್ಯದ ನಂಟು ಅವಿನಾಭವವಾಗಿದೆ.

ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಿ ನಾನು ನನ್ನ ಗೆಳೆಯ ದೇವರಾಜು ಕಪ್ಪಸೋಗೆ (ಚಾಮರಾಜನಗರ ಜಿಲ್ಲೆ ಕನ್ನಡಪ್ರಭದಲ್ಲಿ ಈಗ ವೃತ್ತಿ) ಅಭಿಲಾಷೆಯ ಮೇರೆಗೆ ಜೆ.ಎಸ್.ಎಸ್ ಆಸ್ಪತ್ರೆ ಬಳಿ ಅಗ್ರಹಾರ ದಲ್ಲಿ , ನೇ ಕ್ರಾಸ್ ನಲ್ಲಿ ೧೦*೧೦ ಅಳತೆಯ ರೂಂ ನಲ್ಲಿ ಬಾಡಿಗೆ ಯಲ್ಲಿದ್ದೆ. ಮನೆಯ ಮುಂದೆ ವಿಶಾಲವಾದ ಜಾಗ. " ಕನಸು" ಅಂತ ಗೂಡಿಗೆ ಹೆಸರಿಟ್ಟಿದ್ದೆ. ತದನಂತರ ಗೂಡಿಗೆ ರಾಘವೇಂದ್ರ (ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಗಳ ರೂವಾರಿ) ಎಂಬ ನನ್ನ ಊರಿನ ದೋಸ್ತಿ, ಹೈಸ್ಕೂಲ್ ನಲ್ಲಿ, ಪಿ.ಯು.ಸಿ ಯಲ್ಲಿ ನನ್ನ ಜೂನಿಯರ್, ಹೃದಯದ ಗೆಳೆಯ ಬಂದು ಸೇರಿಕೊಂಡ. ಅಲ್ಲಿಂದಾಚೆಗೆ ನಮ್ಮ ಪಯಣ ಭಾವಗೀತೆಗಳೋಂದಿಗೆ ಸಾಗಿತು.  ನಾವು ಬಹುತೇಕ ಇಸ್ಟಪಡುತ್ತಿದ್ದ, ಆಗಾಗ್ಗೆ ಜಿನುಗುಡುತ್ತಿದ್ದ ಹಾಡುಗಳು, ಜಿ.ಎಸ್.ಎಸ್ ರದ್ದಾಗಿತ್ತು. ಕಾಣದ ಕಡಲಿಗೆ ನಮ್ಮ ಮನ ಹಂಬಲಿಸುತ್ತಿತ್ತು. ಆದರೂ ಹಣತೆ ಹಚ್ಚಬೇಕು
ಅನಿಸುತ್ತಿತ್ತು. ಯಾರು ಕೇಳದಿದ್ದರೂ ಎದೆ ತುಂಬಿ ಹಾಡಬೇಕು ಅನಿಸುತ್ತಿತ್ತು.ಹಾಡು ಹಳೆಯದಾದರೇನು ಭಾವ ನವನವೀನ ಅನಿಸುತ್ತಿತ್ತು. ಅನಿಸುತ್ತಿದ್ದ ಭಾವಗಳಿಗೆ ಜಿ.ಎಸ್. ಎಸ್. ತಮ್ಮ ಭಾವಗೀತೆಗಳ ಮೂಲಕ ರೂಪ ಕೊಟ್ಟಿದ್ದರು. ಅವೇ ನಮ್ಮ ಏಕಾಂತದ  ಸಂಗಾತಿಗಳು. ಸಂಜೆಯ ನಡಿಗೆಯ ಸಾಥಿಗಳು. ರಾತ್ರಿ ಕನಸುಗಳಿಗೆ ಕಾಡುವ ಭಾವಗಳು. ಆಗಿನ ದಿನಗಳಲ್ಲಿ ತಂತ್ರಜ್ಣಾನ ಅಸ್ಟೊಂದು ಮುಂದುವರೆದಿರಲ್ಲಿಲ್ಲ. ವಾಲ್ಕ್ ಮನ್ ಮಾತ್ರ ನಮ್ಮ ಬಳಿಯಿತ್ತು. ಹೊಸ ಭಾವಗೀತೆಯ ಕ್ಯಾಸೆಟ್ ತಂದರೆ ದಿನ ನಮಗೆ ಸಂಭ್ರಮ ನಾನು , ರಾಘು ಸ್ಪರ್ದೆಯ ಮೇಲೆ ಹಾಡುಗಳನ್ನು ಕೇಳುತ್ತಿದ್ದೇವು. ಈಗ ಎಲ್ಲಾ ಬದಲಾಗಿದೆ. ನಾವು ದೊಡ್ದವರಾಗಿದ್ದೇವೆ. ಅವೇ ಸಾಲುಗಳು ಮನದಲ್ಲಿ ಜಿನುಗುಡುತ್ತಿವೆ. ರಾಘು ದೊಡ್ದ ಹೆಸರು ಮಾಡಿದ್ದಾನೆ. ಜಿ.ಎಸ್.ಎಸ್. ಅಗಲಿದ್ದಾರೆ. ಮನದಲ್ಲಿ ಶೂನ್ಯ ಭಾವ. ಕಾಣದ ಕಡಲು ಕಾಡುತ್ತಿದೆ.

ಅವರ ಪ್ರತಿಯೊಂದು ಕವಿತೆಗಳು ಜೀವನ ಸ್ಪೂರ್ತಿ-ಪ್ರೀತಿಯನ್ನು ಒಳಗೊಂಡಿವೆ. ಅವಲ್ಲಾ ಎಂದೂ ಹಳೆಯದಾಗದ ಹಾಡುಗಳು, ಮತ್ತೆ ಮತ್ತೆ ಕೇಳಬೇಕಿನಿಸುವ ನವನವೀನ ಭಾವಗಳು. ಅವರ ಆತ್ಮಕ್ಕೆ ನನ್ನ ಶ್ರದ್ದಾಂಜಲಿ.

ನನಗೆ ಮೈಸೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅರ್ಥಶಾಸ್ತ್ರದಲ್ಲಿ ೦೨ ಚಿನ್ನದ ಪದಕಗಳನ್ನು ನೀಡಿದೆ. ಆ ಘಟಿಕೋತ್ಸವದ ಮುಖ್ಯ ಅಥಿತಿಯಾಗಿ ಜಿ.ಎಸ್. ಎಸ್ ಬಂದಿದ್ದರು. ಅವರ ಸಮ್ಮುಖದಲ್ಲಿ ಚಿನ್ನದ ಪದಕಳನ್ನು ಪಡೆದೆ. ಇದು ನನ್ನ ಬದುಕಿನಲ್ಲಿ ಮರೆಯಲಾಗದ ಅವಿಸ್ಮರಣೀಯ ಘಟನೆ.


ಜಿ.ಎಸ್.ಎಸ್ ರವರ ಹಣತೆ ಹಚ್ಚುತ್ತೇನೆ ಎಂಬ ಕವಿತೆಯ ಸ್ಪೂರ್ತಿಯಿಂದ ನನ್ನಲ್ಲಿ ಈ ಕವಿತೆ ಮೂಡಿದೆ. ಅವರ ಅಗಲಿಕೆಯ ಈ ಸಂದರ್ಭದಲ್ಲಿ ಈ ಕವಿತೆಯನ್ನು ಶ್ರದ್ದಾಂಜಲಿಯಾಗಿ ಸಮರ್ಪಿಸುತ್ತಿದ್ದೇನೆ.

ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//
ಎಲ್ಲಾ ಮನಸ್ಸುಗಳು ಬೆತ್ತಲಾಗಬೇಕು,
ನಟನೆಯ ಮುಖವಾಡಗಳು ಕಳಚಬೇಕು,
ನಿಜವು ಸಂಚುಗಳ ಗೆಲ್ಲಬೇಕು,
ನ್ಯಾಯ ಉಳಿಯಬೇಕು,ಮಾನವಿಯತೆ ಮೆರೆಯಬೇಕು/
ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//

ಅಜ್ಣ್ನಾನದ ಕತ್ತಲೆ ಸರಿಯಬೇಕು,
ಜಾಗೃತಿಯ ಪ್ರಜ್ಣೆ ಅರಳಬೇಕು,
ಎಲ್ಲರ ಕನಸುಗಳು ನನಸಾಗಬೇಕು,
ಸ್ವಾರ್ಥಗಳು ಅಳಿಯಬೇಕು, ಸಂಸ್ಕೃತಿ ಮೆರೆಯಬೇಕು/
ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//

Wednesday, July 10, 2013

ನನ್ನ ಮನಸ್ಸಿನ ಪುಟಗಳು

ಹಾಯ್ ಪ್ರೆಂಡ್ಸ್ , ಶರಣು ಶರಣಾರ್ಥಿ,

ಫೇಸ್ ಬುಕ್ ನ ಅತಿಯಾದ ಅವಲಂಬನೆಯಿಂದಾಗಿ ನನ್ನ ಅಂತರ್ಜಾಲ ಗೆಳೆತನ ದ ಪಯಣದ ಮೊದಲ ಮನೆ ಆರ್ಕುಟ್ ಗೆ ಬರುವುದು ಇತ್ತೀಚೆಗೆ ಬರುವುದು ಬಹಳ ವಿರಳವಾಗಿದೆ. ಆರ್ಕುಟ್ ಕೂಡ ನವೀನ ತಂತ್ರಜ್ಣಾನದ ಪ್ರಯೋಗಶೀಲತೆ ಇಂದಾಗಿ ಬಹಳ ಸೊಗಸಾಗಿದೆ. ಹಾಗಾಗಿ ಇಲ್ಲಿಗೆ ಬರುತ್ತಿರಲೆಬೇಕು ಎಂಬ ಮನಸ್ಸಾಗಿದೆ.

ಸುಮಾರು 2007 ನೆ ವರ್ಷದಿಂದ ನಾನು ಆರ್ಕುಟ್ / ಅಂತರ್ಜಾಲ ವೆಬ್ ತಾಣ/ಬ್ಲಾಗ್ ಗಳಲ್ಲಿ ಸಕ್ರೀಯ ವಾಗಿ ನನ್ನ ಭಾವ ಲಹರಿ/ಚಿಂತನೆ/ಕನಸುಗಳನ್ನು ನಿಮ್ಮೊಟ್ಟಿಗೆ ಹಂಚಿಕೊಂಡು ಬರುತ್ತಿದ್ದೇನೆ. ಇತ್ತೀಚೆಗೆ ನನ್ನ ಮನಸ್ಸಿಗೆ ಬಂದ ಯೊಚನೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ , ಅದು ಕೂಡ ನಿಮ್ಮ ಸಹಕಾರದಿಂದಲೆ ಆಗಬೇಕಾದ ಕೆಲಸ. ಏನಂತೀರಾ ?

ಅಸ್ಟು ವರ್ಶಗಳಿಂದ ನಾನು ಬರೆದ /ಕಳುಹಿಸಿದ ಸಂದೇಶ/ಸ್ಕ್ರಾಪ್ಸ್/ಹಿತನುಡಿ/ಮನಸ್ಸಿನ ಮಾತು ಗಳನ್ನೆಲ್ಲಾ ಒಂದೆಡೆ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂಬುದು ನನ್ನ ಚಿಂತನೆ. ನನ್ನ ಹಲವಾರು ಬರಹ/ಸಂದೇಶ ಗಳನ್ನು ನನ್ನ ಹಲವು ಸ್ನೇಹಿತರು ತಮ್ಮ ಪ್ರೊಪೈಲ್ ನಲ್ಲಿ, ಅವರ ಹೆಸರ ಮುಂದಿನ ಕ್ಯಾಪ್ಶನ್ ನಲ್ಲಿ ಈಗಲು ಬರೆದುಕೊಂಡಿರುವುದು ಸುಳ್ಳಳ್ಳ. ಅಂತಹ ಗೆಳೆಯರಿಗೆ ನಾನು ಹೇಳ ಬಯಸುವುದು," ನನ್ನ ವಾಕ್ಯಗಳನ್ನು ನೀವು ಬಳಸಿಕೊಳ್ಳಿ. ಅದು ತಪ್ಪಲ್ಲ,ನಾನು ನಿಮ್ಮವನು, ನನ್ನ ಆಲೋಚನೆ/ಭಾವನೆಗಳ ಜೊತೆಗಾರರು ನೀವು. ಆದರೆ ಅದಕ್ಕೂ ಮುಂಚೆ ನೈತಿಕವಾಗಿ ನನ್ನ ಬಳಿ ಆ ಬಗ್ಗೆ ಹೇಳಿ, ನಾನು ಬೇಡ ಎನ್ನುವುದಿಲ್ಲ."

ಒಕೆ...ಈಗ ಹೇಳಿ ನನ್ನ ಈ ಆಲೋಚನೆಗೆ ನೀವು ಸಾಥ್ ಕೊಡುವುದಾದರೆ, ಶೀಘ್ರದಲ್ಲೆ ನನ್ನ ಮನಸ್ಸಿನ ಪುಟಗಳು ನಿಮ್ಮ ಕೈ ಸೇರಲಿದೆ.

ನಿಮ್ಮವ,

ಲಿಂಗೇಶ್ ಹುಣಸೂರು,
E-mail me@: lingeshkc9@gmail.com, lingesh_dhanya@yahoo.co.in