ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Saturday, July 28, 2012

* ಆತ್ಮಾವಲೋಕನ *

* ಆತ್ಮಾವಲೋಕನ *



ಓ ಮನಸೇ, ನನ್ನ ಕನಸೇ,



ಏನಾಗಬೇಕೆಂದು ಬಯಸಿದ್ದೆ ನಾನು,

ಏನಾಗಿ ಹೋದೆ..?!!!



ನಾನೇ ಬರೆದ ಕವನಗಳು

ನನ್ನನ್ನ ಅಣಕಿಸುತ್ತಿವೆ/



ಬದುಕು-ಪ್ರೀತಿ-ಸಾಧನೆ ಗಳ ಬಗೆಗೆ,

ನಾ ಬರೆದ ಸಾಲುಗಳನ್ನು ತೋರಿಸಿ//



ಏನಾಗಬೇಕಿತ್ತು, ಈಗೇನಾಗಿದ್ದೇನೆ?!!!



ಓರಗೆಯವರು ಬೆಳೆದರು,

ಮೂರನೆಯವರು ಮೆರೆದರು/



ಸೋಮಾರಿತನ ಮೈ ಸೇರಿತು,

ಪ್ರೇಮ ಮನಸ್ಸೊಡೆಯಿತು/



ಕನಸುಗಳು ತಿರುಗಿಬಿದ್ದವು,

ಆಸೆಗಳು ಓಡಿಹೋದವು/



ಹಾಸಿಗೆ ಕೈ ಸೆರೆಯಾಯಿತು,

ನಿದಿರೆಯಲಿ ಜಗ ಮರೆಯಿತು/





ಈಗೇನಾಗಿದ್ದೇನೆ, ಮುಂದೇನಾಗಬೇಕು..?!!!



ಅಂದುಕೋಂಡಿದ್ದು ಆಗಲೇಬೇಕು,

ಆಗುವವರೆವಿಗೂ ದಣಿಯಲೇಬೇಕು/



ಕಂಡ ಕನಸುಗಳು ನನಸಾಗಲೇಬೇಕು,

ರಾತ್ರಿಗಳನು ಸುಟ್ಟು ಸಾಧಿಸಲೇಬೇಕು/



ನನ್ನ ಮಗು ನೆಮ್ಮದಿಯಾಗಿ ನಿದ್ರೆ ಮಾಡಬೇಕು,

ಯಶಸ್ಸು ನನ್ನ ಹುಡುಕಿಕೋಂಡು ಬರಬೇಕು/



ಬದುಕಲೇಬೇಕು ಸಾರ್ಥಕವಾಗಿ,

ಜಯಿಸಲೇಬೇಕು ಕನ್ನಡಿಗನಾಗಿ/



ನಾ ಬಯಸಿದ ಬದುಕು,

ನನ್ನದಾಗಲೇಬೇಕು/



-ಲಿಂಗೇಶ್ ಹುಣಸೂರು,

ಬಿಂದುವಿನಿಂದ ಅನಂತದೆಡೆಗೆ...