ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Monday, May 27, 2013

ಆದರೂ ಹಣತೆ ಹಚ್ಚಬೇಕು,


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//





ಎಲ್ಲಾ ಮನಸ್ಸುಗಳು ಬೆತ್ತಲಾಗಬೇಕು,
ನಟನೆಯ ಮುಖವಾಡಗಳು ಕಳಚಬೇಕು,
ನಿಜವು ಸಂಚುಗಳ ಗೆಲ್ಲಬೇಕು,
ನ್ಯಾಯ ಉಳಿಯಬೇಕು,ಮಾನವಿಯತೆ ಮೆರೆಯಬೇಕು/


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//



ಅಜ್ಣ್ನಾನದ ಕತ್ತಲೆ ಸರಿಯಬೇಕು,
ಜಾಗೃತಿಯ ಪ್ರಜ್ಣೆ ಅರಳಬೇಕು,
ಎಲ್ಲರ ಕನಸುಗಳು ನನಸಾಗಬೇಕು,
ಸ್ವಾರ್ಥಗಳು ಅಳಿಯಬೇಕು, ಸಂಸ್ಕೃತಿ ಮೆರೆಯಬೇಕು/


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//